ಸಹಾಯಕ ಸಬ್ ಇನ್ಸ್ಪೆಕ್ಟರ್ ಬಾಬು ರಾಮ್ (೧೯೭೨-೧೯೨೦) ಅವರು ಶ್ರೀನಗರದ ವಿಶೇಷ ಕಾರ್ಯಾಚರಣೆ ಗುಂಪಿನ (ಎಸ್ಒಜಿ) ಪೊಲೀಸ್ ಅಧಿಕಾರಿ. ಅವರಿಗೆ ಶಾಂತಿ ಸಮಯದ ಅತ್ಯುನ್ನತ ಶೌರ್ಯ ಪ್ರಶಸ್ತಿಯಾದ ಅಶೋಕ ಚಕ್ರ ನೀಡಲಾಯಿತು. == ಆರಂಭಿಕ ಜೀವನ == ಜಮ್ಮು ಪ್ರದೇಶದ ಮೆಂಧಾರ್ ಜಿಲ್ಲೆಯ ಪೂಂಚ್ ಜಿಲ್ಲೆ ಧರಣ ಗ್ರಾಮದಲ್ಲಿ ೧೯೭೨ರ ಮೇ ೧೫ರಂದು ಜನಿಸಿದ ರಾಮ್, ಬಾಲ್ಯದಿಂದಲೂ ಸಶಸ್ತ್ರ ಸೇವೆಗಳಿಗೆ ಸೇರಲು ಬಯಸಿದ್ದರು. == ಪೊಲೀಸ್ ವೃತ್ತಿಜೀವನ == ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ, ಅವರನ್ನು ೧೯೯೯ ರಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸ್‌ನಲ್ಲಿ ಕಾನ್ಸ್ಟೇಬಲ್ ಆಗಿ, ೨೦೦೨ರ ಜುಲೈ ೨೭ ರಂದು ನೇಮಿಸಲಾಯಿತು. ಶ್ರೀನಗರ ವಿಶೇಷ ಕಾರ್ಯಾಚರಣೆ ಗುಂಪಿಗೆ (ಎಸ್. ಒ. ಜಿ.) ಸೇರಿದ ಅವರು ಹಲವಾರು ಭಯೋತ್ಪಾದನಾ-ವಿರೋಧಿ ಕಾರ್ಯಾಚರಣೆಗಳಲ್ಲಿ ಭಾಗವಹಿಸಿದರು. ಇದರಲ್ಲಿ ಹಲವಾರು ಉಗ್ರಗಾಮಿಗಳು ಹತರಾದರು. ಬಂಡಾಯ ವಿರೋಧಿ ಘಟಕದಲ್ಲಿದ್ದ ಸಮಯದಲ್ಲಿ ೧೪ ಯುದ್ಧಗಳಲ್ಲಿ ಭಾಗವಹಿಸಿದರು. ಅಗ ೨೮ ಭಯೋತ್ಪಾದಕರು ಹತರಾದರು. ಬಾಬು ರಾಮ್ ಭಯೋತ್ಪಾದನಾ-ವಿರೋಧಿ ಕಾರ್ಯಾಚರಣೆಗಳಲ್ಲಿ ಆಗಾಗ್ಗೆ ಮುಂಚೂಣಿಯಲ್ಲಿದ್ದರು. ಶೌರ್ಯ ಮತ್ತು ಆತ್ಮಸಾಕ್ಷಿಯ ಕಾರಣಕ್ಕಾಗಿ ಅವರು ಅಕಾಲಿಕ ಬಡ್ತಿ ಪಡೆದರು. == ದಿಟ್ಟತನ == ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಅಧಿಕಾರಿಗಳು ಮತ್ತು ಭದ್ರತಾ ಪಡೆಗಳು ಪಂಥಾ-ಚೌಕ್ ಮೂಲಕ ಪ್ರಯಾಣಿಸುವ ವಾಹನಗಳನ್ನು ಪರಿಶೀಲಿಸುತ್ತಿದ್ದರು. ನಂತರ ಮೂವರು ಭಯೋತ್ಪಾದಕರು ಮೊಪೆಡ್ನಲ್ಲಿ ಬಂದು ಹೆದ್ದಾರಿಯಲ್ಲಿ ನಿಂತಿದ್ದ ಅರೆಸೈನಿಕ ಪಡೆ ಸದಸ್ಯರ ಮೇಲೆ ದಾಳಿ ಮಾಡಿದರು. ಅವರ ಶಸ್ತ್ರಾಸ್ತ್ರವನ್ನು ತೆಗೆದುಕೊಂಡು ಪೊಲೀಸರು ಮತ್ತು ಭದ್ರತಾ ಪಡೆಗಳ ಮೇಲೆ ವಿವೇಚನಾರಹಿತವಾಗಿ ಗುಂಡು ಹಾರಿಸಿದರು. ದಾಳಿಯ ನಂತರ, ಭಯೋತ್ಪಾದಕರು ಪಂಥಾ-ಚೌಕ್ನ ಧೋಬಿ ಮೊಹಲ್ಲಾವನ್ನು ಪ್ರವೇಶಿಸಿದರು. ತಕ್ಷಣವೇ ಆ ಪ್ರದೇಶವನ್ನು ಸುತ್ತುವರಿದು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು. ಎಎಸ್ಐ ರಾಮ್ ಅಡ್ವಾಸ್ಡ್ ಪಾರ್ಟಿಯ ಭಾಗವಾಗಿದ್ದರು. ಅಡಗಿಕೊಂಡಿದ್ದ ಭಯೋತ್ಪಾದಕರ ವಿರುದ್ಧ ದಾಳಿ ನಡೆಸಿದರು, ನಂತರ ಭಯೋತ್ಪಾದಕರು ಜಂಟಿ ಶೋಧ ತಂಡದ ಮೇಲೆ ಗುಂಡು ಹಾರಿಸಿದರು. ಇದು ಎನ್ಕೌಂಟರ್‌ಗೆ ಕಾರಣವಾಯಿತು. ಕಮಾಂಡರ್ ಸೇರಿದಂತೆ ಮೂವರು ಲಷ್ಕರ್-ಎ-ತೈಬಾ (ಎಲ್ಇಟಿ) ಭಯೋತ್ಪಾದಕರ ಹತ್ಯೆಯೊಂದಿಗೆ ಈ ಎನ್ಕೌಂಟರ್ ಕೊನೆಗೊಂಡಿತು. ಆದರೆ, ಈ ಚಕಮಕಿಯಲ್ಲಿ ರಾಮ್ ಅವರು ಕೊಲ್ಲಲ್ಪಟ್ಟರು. == ಅಶೋಕ ಚಕ್ರ == ಭಾರತದ ೭೫ ನೇ ಸ್ವಾತಂತ್ರ್ಯ ದಿನದ ಸಂದರ್ಭದಲ್ಲಿ, ಅವರ ಧೈರ್ಯ, ಸಮರ್ಪಣೆ ಮತ್ತು ಆತ್ಮಸಾಕ್ಷಿಯನ್ನು ಗುರುತಿಸಿ ಅಂದಿನ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಮರಣೋತ್ತರವಾಗಿ ಅಶೋಕ ಚಕ್ರವನ್ನು ನೀಡಿದರು. ೨೦೨೨ ರ ಗಣರಾಜ್ಯೋತ್ಸವದಂದು ಭಾರತದ ರಾಷ್ಟ್ರಪತಿ ರಾಮ್ ಅವರ ಕುಟುಂಬದವರಿಗೆ ಅದನ್ನು ಪ್ರದಾನ ಮಾಡಿದರು. == ಉಲ್ಲೇಖಗಳು == == ಬಾಹ್ಯ ಕೊಂಡಿ == ಎಎಸ್ಐ ಬಾಬು ರಾಮ್ ಅವರ ಜೀವನಚರಿತ್ರೆ ಹಿಂದಿಯಲ್ಲಿ-://./----- 2022-01-28 ವೇಬ್ಯಾಕ್ ಮೆಷಿನ್ ನಲ್ಲಿ.